ಇತ್ತೀಚಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರಿಗೂ ಬೇಸರ ತರಿಸುವಂತಿದೆ. ಭ್ರಷ್ಟಾಚಾರ-ಅನೈತಿಕತೆ-ಶಾಸಕರ ಖರೀದಿ ಮುಂತಾದವು ರಾಜಕಾರಣದ ಅನಿವಾರ್ಯ ಲಕ್ಷಣಗಳೇನೋ ಎಂಬಂತೆ ನಮ್ಮ ರಾಜ್ಯದ ಎಲ್ಲ ಪಕ್ಷಗಳ ಮುಖಂಡರೂ ವರ್ತಿಸುತ್ತಿರುವುದು ದೇಶಕ್ಕೆ ಒಳ್ಳೆಯ ಭವಿಷ್ಯ ಬಯಸುವವರಿಗೆ ನಿರಾಸೆ ಮೂಡಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಇಂದಿನ ಬೆಳವಣಿಗೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಉಂಟಾಗಿದೆ ಎಂದು ನನ್ನ ಭಾವನೆ. ಕಾರಣಗಳು ಎರಡು: ಮೊದಲನೆಯದು, ರಾಜ್ಯದಲ್ಲಿ ಇಂದು ಆಡಳಿತ ಚುಕ್ಕಾಣಿ ಹಿಡಿದಿರುವವರಲ್ಲಿ ಸಂಘದೊಂದಿಗೆ ಸಂಪರ್ಕ ಹೊಂದಿರುವ ಕೆಲವರಿದ್ದಾರೆ. ಅವರೆಲ್ಲರ ಚಟುವಟಿಕೆಗಳನ್ನು ಜನಸಾಮಾನ್ಯರು ಸಂಘದ ದೃಷ್ಟಿಕೋನದಿಂದಲೂ ಅಳೆಯುತ್ತಿರುತ್ತಾರೆ. ಎರಡನೆಯದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಶೈಲಿಯಲ್ಲಿ ‘ಮನೆಯೊಳಗಿನ’ ಮಾತುಕತೆಗಳನ್ನು ಸಾರ್ವಜನಿಕಗೊಳಿಸುವ ವಿಧಾನ ಇಲ್ಲದಿರುವುದು. ಸಂಘದ ಹಿರಿಯ ಕಾರ್ಯಕರ್ತರ ನಿಕಟ ಸಂಪರ್ಕದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿರುವ ನನಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಕೆಲವು ಮಾಹಿತಿ ಇರುವುದರಿಂದ ಈ ಚಿಂತನೆಗಳನ್ನು ಹಂಚಿಕೊಳ್ಳುವುದು (ಎರಡನೆಯ ಕಾರಣಕ್ಕಾಗಿ) ಸೂಕ್ತವೆಂದೆನಿಸಿ ಈ ಲೇಖನ ಬರೆಯುತ್ತಿದ್ದೇನೆ. ಇಂದು ಬಿಜೆಪಿ ಪಕ್ಷ ಹಾಗೂ ಸರಕಾರ ನಮ್ಮ ರಾಜ್ಯದಲ್ಲಿ ಮಾಡ
Social News , Articles, And Viral Videos